ದೇವದರ್ಶನ ಗುಡಾರದ ವೇದಿಗಳು ಮತ್ತು ಆರಾಧನೆಯಲ್ಲಿ ಅವುಗಳ ಪ್ರಾಮುಖ್ಯತೆ
ದೇವದರ್ಶನ ಗುಡಾರದ ವೇದಿಗಳನ್ನು ಯೆಹೋವನು ಹೇಳಿದ ಪ್ರಕಾರನೇ ಮಾಡಲಾಗಿತ್ತು ಮತ್ತು ಅವುಗಳಿಗೆ ವಿಶೇಷವಾದ ಮಹತ್ವ ಇತ್ತು.
-
ಸುಗಂಧ ದ್ರವ್ಯದ ಮಿಶ್ರಣವನ್ನು ಧೂಪ ಹಾಕಿದಾಗ ಯೆಹೋವನಿಗೆ ಖುಷಿ ಆಗ್ತಿತ್ತು. ಅದೇ ತರ ಯೆಹೋವನ ಸೇವಕರು ಪ್ರಾರ್ಥಿಸಿದಾಗ ಆತನಿಗೆ ತುಂಬ ಖುಷಿಯಾಗುತ್ತೆ
-
ಯಜ್ಞವೇದಿಯ ಮೇಲೆ ಅರ್ಪಿಸುತ್ತಿದ್ದ ಯಜ್ಞಗಳನ್ನು ಯೆಹೋವನು ಸ್ವೀಕರಿಸುತ್ತಿದ್ದನು. ಈ ಯಜ್ಞವೇದಿಯನ್ನು ಪವಿತ್ರ ಸ್ಥಳದ ಬಾಗಿಲ ಮುಂದೆ ಇಡಲಾಗಿತ್ತು. ಇದು ಯೇಸು ಕ್ರಿಸ್ತನ ವಿಮೋಚನ ಮೌಲ್ಯದಲ್ಲಿ ನಂಬಿಕೆ ಇಟ್ಟರೆ ಮಾತ್ರ ಯೆಹೋವನು ನಮ್ಮನ್ನು ಸ್ವೀಕರಿಸುತ್ತಾನೆ ಅಂತ ನೆನಪಿಸುತ್ತೆ.—ಯೋಹಾ 3:16-18; ಇಬ್ರಿ 10:5-10
ಯೆಹೋವನಿಗೆ ಅರ್ಪಿಸುತ್ತಿದ್ದ ಧೂಪದಂತೆ ನನ್ನ ಪ್ರಾರ್ಥನೆ ಇರಬೇಕಂದ್ರೆ ಏನು ಮಾಡಬೇಕು?—ಕೀರ್ತ 141:2